ಸುಮ್ಮನೆ ಹಾಗೆ........... ಸ್ವಲ್ಪ ತಮಾಷೆ, ಸ್ವಲ್ಪ ಹರಟೆ, ಸ್ವಲ್ಪ ವೈಚಾರಿಕತೆ, ಸ್ವಲ್ಪ ಅದು, ಸ್ವಲ್ಪ ಇದು...... ಏನೇನೋ ಬರೆಯುವ ಆಸೆ..............
Friday, October 05, 2012
ಹಿಮ ಮತ್ತು ಗುರು ಮಾವ
Wednesday, February 23, 2011
ದ್ವೀಪವ ಬಯಸಿ
Tuesday, August 31, 2010
Wednesday, August 04, 2010
ಉಪಾಯ!
Wednesday, July 07, 2010
ಝವಾದಿ
ಈ ಕಾದಂಬರಿಯನ್ನು ನಾನು ೨ ವಾರಗಳಿಗೂ ಕಡಿಮೆ ಸಮಯದಲ್ಲಿ ಓದಿ ಮುಗಿಸಿದೆ. ನನ್ನ ಕನ್ನಡ ಓದುವ ಸಾಧಾರಣ ವೇಗಕ್ಕೆ ೫೫೦ ಪುಟಗಳನ್ನು ಇಷ್ಟು ಬೇಗ ಮುಗಿಸಿದ್ದು ನನಗೇ ಆಶ್ಚರ್ಯವಾಯಿತು.
ಲೇಖಕಿ ಶ್ರಿಮತಿ ಸುನಂದ ಬೆಳಗಾಂಕರ್ ಅವರು ಒಂದು ಸಾಮಾನ್ಯ ಸಾಂಸಾರಿಕ ಕಥೆಯನ್ನು ಸುಂದರವಾದ ಕಾದಂಬರಿಯಾಗಿ ಹೆಣೆದಿದ್ದಾರೆ.
ಮುಖ್ಯ ಪಾತ್ರಧಾರಿಯಾದ ಶಂಕರ ರಾಯರು, ಮೂರನೆ ವ್ಯಕ್ತಿಯ ಚಾಡಿ ಕೇಳಿ ತಮ್ಮ ಪತ್ನಿ, ಮಕ್ಕಳನ್ನು ತಿರಸ್ಕರಿಸಿರುತ್ತಾರೆ. ಎಷ್ಟೋ ವರ್ಷಗಳ ನಂತರ, ಆಫ್ರಿಕಾದ ಗೊರೊಂಗೊರೊ ಕ್ರೇಟರಿನ ಒಂದು ರಾಜ ಸಿಂಹ ಕುಟುಂಬದ ಪರಿಸ್ಥಿತಿಯು ಇವರ ಕುಟುಂಬದಂತೆಯೇ ಆಗಿದ್ದು, ನಂತರ ಸಿಂಹ ರಾಜ ತನ್ನ ತಪ್ಪನ್ನು ಅರಿತು, ಸಿಂಹಿಣಿಯನ್ನು ಸೇರುತ್ತದೆ. ಆ ಕುಟುಂಬಕ್ಕೂ, ತಮ್ಮ ಸಂಸಾರಕ್ಕೂ ಇರುವ ಹೋಲಿಕೆಯನ್ನು ಕಂಡು,ಅಲ್ಲಿನ ಗೈಡ್ ನ ಮಾತುಗಳಿಂದ, ತಾವು ಮಾಡಿದ ತಪ್ಪಿನ ಅರಿವಾಗಿ, ಪ್ರಾಯಶ್ಚಿತ್ತಾರ್ಥವಾಗಿ, ಮುಂಬೈಗೆ ಹಿಂದಿರುಗಿ, ಸಂಸಾರದೊಂದಿಗೆ ಒಂದಾಗುತ್ತಾರೆ. ಝಾವಾದಿ ಎಂದರೆ ಸ್ವಹೀಲಿ ಭಾಷೆಯಲ್ಲಿ "(ದೇವರ)ಕಾಣಿಕೆ" ಎಂದರ್ಥ. ವಿಷೇಶವಾದ ಕಥಾ ವಸ್ತು ಇಲ್ಲವಾದರು, ಕಥೆಯನ್ನು ಹೆಣೆದಿರುವ ರೀತಿ ಸೊಗಸಾಗಿದೆ.
- ಆಫ್ರಿಕಾದ ಗೊರೊಂಗೊರೊ ಕ್ರೇಟರಿನ ವರ್ಣನೆ ಸೊಗಸಾಗಿದೆ. ಓದುತ್ತಿರುವಂತೆ, ಅಲ್ಲಿನ ಪ್ರಾಣಿಗಳು ನಮ್ಮ ಕಣ್ಣೆದುರಿಗೇ ಸುಳಿದಾಡುತಿರುವಂತೆನಿಸುತ್ತದೆ.
- ಸಂಭಾಷಣೆಗಳು ಧಾರವಾಡ ಶೈಲಿಯ ಕನ್ನಡದಲ್ಲಿದ್ದು, ಚೇಷ್ಟೆಯ ಮಾತುಗಳು, ಅಂತಃಕರಣದ ಮಾತುಗಳು ಬಹಳ ಸಹಜವಾಗಿದೆ
- ಮುಖ್ಯ ಪಾತ್ರಗಳ ಮನಃಸ್ಥಿತಿಯ ವರ್ಣನೆ ನಮ್ಮೊಳಗೊಬ್ಬರ ಕಥೆಯನ್ನು ಓದುತ್ತಿರುವಂತೆನಿಸುತ್ತದೆ.
ಇದನ್ನು ಅಮ್ಮ ಸುಮಾರು ಹತ್ತು ವರ್ಷಗಳ ಹಿಂದೆ ಓದಿದ್ದು, ಲಿಬ್ರರಿಯಲ್ಲಿ ಇತ್ತೀಚೆಗೆ ಕಂಡು, ತಂದಿದ್ದರು. ನಮಗೆ ಸಿಕ್ಕ ಪ್ರತಿ ೧೯೯೪ ನಲ್ಲಿ ಮುದ್ರಣಗೊಂಡಿದ್ದು. ಮುದ್ರಣದಲ್ಲಿ ಹಲವು ತಪ್ಪುಗಳಿದ್ದುವು.
- ಸುಮಾರು ಸಂಭಾಷಣೆಗಳು ಇಂಗ್ಲಿಷಿನಲ್ಲಿದ್ದು, ಇಂಗ್ಲಿಷನ್ನು ಕನ್ನಡೀಕರಿಸಿ ಬರೆದದ್ದು ಓದಲು ಹಲವೆಡೆ ತಮಾಷೆಯಾಗಿತ್ತು.
- ಸಂಭಾಷಣೆಗಳನ್ನು ಕಡಿಮೆ ಮಾಡಿ, ಪುಸ್ತಕದ ಗಾತ್ರ ಸ್ವಲ್ಪ ಕಡಿಮೆ ಮಾಡಬಹುದಿತ್ತು. ಆದರು, ತುಂಬ ಬೋರ್ ಆಗುವಂತೇನು ಇಲ್ಲ.
ಒಮ್ಮೆ ಓದಲು, ಒಳ್ಳೆಯ ಲಘುವಾದ ಕಾದಂಬರಿ.
Friday, December 11, 2009
ಖಾಂಡೇಕರರ ಯಯಾತಿ
ಖಾಂಡೇಕರರ ಯಯಾತಿಯನ್ನು ಓದಿ ಮುಗಿಸಿ ಒಂದೂವರೆ ತಿಂಗಳೇ ಕಳೆದರೂ ಅದರ ಬಗ್ಗೆ ೨ ಸಾಲೂ ಬರೆಯಲು ಸಾಧ್ಯವಾಗಿಲ್ಲ. ಕೆಲಸ ಹೆಚ್ಚಾಗಿರುವುದು ಒಂದು ಕಾರಣವಾದರೆ, ಬರೆಯಬೇಕೆನ್ದಿರುವುದನ್ನು ಬರೆಯಲು ತಕ್ಕ ಪದಗಳು ದೊರೆಯದಿರುವುದೇ ಮತ್ತೊಂದು ಪ್ರಮುಖ ಕಾರಣ. ಯಯಾತಿ ಒಂದು Classic novel. ಅದಕ್ಕೆ ಜ್ಞಾನಪೀಟ (i couldn't type the exact spelling :( ) ಪ್ರಶಸ್ತಿ ದೊರೆತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಕಾರ್ನಾಡರ ಯಯಾತಿಗೂ, ಖಾಂಡೇಕರರ ಯಯಾತಿಗೂ ಬಹಳ ವ್ಯತ್ಯಾಸವನ್ನು ಕಂಡೆ. ಹೌದು ಒಂದು ದೊಡ್ಡ ಕಾದಂಬರಿಯಾದರೆ ಮತ್ತೊಂದು ನಾಟಕ. ಆ ನಾಟಕವನ್ನು ನಾನು ಪಿ.ಯು.ಸಿ ಯ ನಂತರ ಮತ್ತೆ ಓದಿಲ್ಲವಾದರೂ, ಈ ಕಾದಂಬರಿಯಲ್ಲಿ ಬಹಳ ಸೂಕ್ಷ್ಮತೆಗಳನ್ನು ಸೆರೆ ಹಿಡಿದಿದ್ದಾರೆ ಎಂದು ಹೇಳಬಲ್ಲೆ.
ಯಯಾತಿ, ದೇವಯಾನಿ, ಶರ್ಮಿಷ್ಠೆ, ಹಾಗು ಕಚ - ಇವು ಪ್ರಮುಖ ಪಾತ್ರಗಳಾಗಿದ್ದು, ಈ ನಾಲ್ಕೂ ಪಾತ್ರಗಳ ಮನಃ ಸ್ಥಿತಿ ಯನ್ನು ಬಹಳ ಸುಂದರವಾಗಿ ವಿವರಿಸಿದ್ದಾರೆ. ಯಯಾತಿಯ ಮನಸ್ಸಿನ ಗೊಂದಲಗಳು, ಅವನ ಅಸಂತೃಪ್ತ ಮನಸ್ಸು, ಪಟ್ಟದರಸಿಯಾಗುವುದೊಂದೇ ಜೀವನದ ಸಂತೋಷ ಎಂದು ಭಾವಿಸಿದ್ದ ದೇವಯಾನಿ, ಆಕೆಯ ಹಟ, ತಾನು ಶುಕ್ರಾಚಾರ್ಯರ ಮಗಳೆಂಬ ಅಹಂಕಾರ, ಶರ್ಮಿಷ್ಠೆಯ ತ್ಯಾಗ, ಅಸಹಾಯಕತೆ.. ಹೀಗೆ ಪ್ರತಿಯೊಂದನ್ನೂ ಮನ ಮುಟ್ಟುವ ರೀತಿಯಲ್ಲಿ ಬರೆದಿದ್ದಾರೆ.
ಪ್ರತಿಯೊಂದು ಪಾತ್ರವನ್ನು ಓದುವಾಗಲೂ, ಓದುಗರು ತಾವೇ ಆ ಪಾತ್ರವನ್ನು ಹೊಕ್ಕು, ಅನುಭವಿಸುವ ಹಾಗಿದೆ!ನಾನಂತೂ, ಇದನ್ನು ಓದುವಾಗ ಅದೆಷ್ಟೋ ಬಾರಿ, ಸಂಪೂರ್ಣವಾಗಿ ಆ ಸನ್ನಿವೇಶಗಳಲ್ಲಿ ಮುಳುಗಿ ಹೋಗಿ, ನನಗೇ ತಿಳಿಯದೆ ಕಣ್ಣೀರು ಸುರಿಸುವಂತಾಗಿತ್ತು! ನಾನು ಅಷ್ಟೊಂದು ತಲ್ಲೀನಲಾಗಿರುವುದನ್ನು ಕಂಡು ದೀಪಕ್ ಕೆಲವೊಮ್ಮೆ ನಾನು ಓದುವುದೇ ಸಾಕು ಎಂದೂ ಯೆಚ್ಚರಿಸಿದ್ದುಂಟು !
ನಿಮಗೂ ಯಯಾತಿ ಇಷ್ಟವಾಗುತ್ತದೆ ಎಂದು ಖಂಡಿತವಾಗಿ ಹೇಳಬಲ್ಲೆ. ಅವಕಾಶ ಸಿಕ್ಕಾಗ ಖಂಡಿತ ಓದಿ.
Pls excuse the typos in this post, which i could identify, but tried hard in vain to fix them, thanks to this kannada editor :(
Monday, August 31, 2009
ಪೊಳ್ಳು ದೃಷ್ಟಿ ಬೊಂಬೆಯೊಳಗೊಂದು ಪಕ್ಷಿ ಸಂಸಾರ!
ಆ ಗೂಡನ್ನು ಅಷ್ಟು ಹತ್ತಿರದಿಂದ ನೋಡುವುದು ರೋಮಾಂಚಕಾರಿಯಾಗಿದ್ದರೂ, ಆ ಪುಟ್ಟ ಹಕ್ಕಿಗಳ ಭೀಭತ್ಸ್ಯ ಕೂಗಿನಿಂದ ಅಲ್ಲಿಂದ ದೂರ ಸರಿದು, ನಿಃಶಬ್ಧವಾಗಿ ಕುಳಿತೆವು. ಎರಡು ನಿಮಿಷಗಳ ನಂತರ, ಕಂದು ಬಣ್ಣದ ಹೆಣ್ಣು ಹಕ್ಕಿ ಹಾರಿ ಬಂದು, ಸುತ್ತಲೂ ಪರಿಶೀಲಿಸಿ, ಅಪಾಯವೇನೂ ಇಲ್ಲವೆಂದು ಖಾತ್ರಿ ಪಡಿಸಿಕೊಂಡು, ಮೊಟ್ಟೆಗಳಿಗೆ ಕಾವು ನೀಡಲು ಆ ಪುಟ್ಟ ಗೂಡನ್ನು ಹೊಕ್ಕಿತು. ಕಪ್ಪು ಬಣ್ಣದ ಗಂಡು ಹಕ್ಕಿ ಅಲ್ಲೇ ತಂತಿಯ ಮೇಲೆ ಕಾವಲು ಕಾಯುತ್ತಿರುವಂತೆ ಕುಳಿತಿತ್ತು. ತನ್ನ ಗೂಡಿನ ಬಳಿಯಲ್ಲಿ ಏನಾದರೂ ಆಪತ್ತನ್ನು ಶಂಕಿಸಿದರೆ, ಚಿಟಾರನೆ ಚೀರಿ, ತನ್ನ ಸಂಗಾತಿಗೆ ಸೂಚನೆ ನೀಡುತ್ತಿತ್ತು.
ಹೀಗೆಯೇ ಒಂದು ವಾರ ನಡೆಯಿತು. ಆ ಹೆಣ್ಣು ಹಕ್ಕಿ ಗೂಡಿನಿಂದ ಹೊರಗೆ ಹಾರುವುದನ್ನೇ ಕಾಯ್ದುಕೊಂಡಿದ್ದು, ನಾವು ಇಣುಕಿ ನೋಡಿ ಸಂತಸ ಪಡುತ್ತಿದ್ದೆವು, ಕೆಲವೊಮ್ಮೆ ಫೋಟೋ ತೆಗೆದುಕೊಳ್ಳುತ್ತಿದ್ದೆವು.
ಸುಮಾರು ಒಂದು ವಾರದ ನಂತರ ಮೊಟ್ಟೆಗಳು ಒಡೆದು, ಕಪ್ಪು ಮಾಂಸದ ಮುದ್ದೆಗಳಂತಿದ್ದ ಸಣ್ಣ ಮರಿಗಳು ಹೊರಬಂದಿದ್ದುವು! ರೂಪದಲ್ಲಿ ಹಕ್ಕಿಗಳನ್ನು ಇಷ್ಟೂ ಹೋಲದಿದ್ದ ಅವುಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದ್ದುದು ಹಳದಿ ಬಣ್ಣದ ಕೊಕ್ಕುಗಳು ಮಾತ್ರ.
Wednesday, January 10, 2007
Thursday, October 19, 2006
ದ್ವಂದ್ವ
ಮುಂದಿನ ದಿನಗಳ ಬಗ್ಗೆ ಆತಂಕವೋ,
ಕನಸುಗಳು ನನಸಾಗುವ ನಿರೀಕ್ಷೆಯೋ,
ಮುಂದೆ ಸಿಗುವ ಹೊಸ ಸುಖದ ಬಗ್ಗೆ ಸಂತೋಷವೋ?
Tuesday, September 05, 2006
ಮರೆಯಲಾರದ ಶಾಲಾ ಪಾಠಗಳು
ಒಳ್ಳೆಯ ಅಧ್ಯಾಪಕರು ಮತ್ತು ಅವರ ಪಾಠಗಳು ವಿದ್ಯಾರ್ಥಿಗಳ ಮನಸಿನ ಮೇಲೆ ಹೇಗೆ ಮರೆಯಲಾಗದ ಪ್ರಭಾವ ಬೀರುತ್ತವೋ, ಹಾಗೆಯೇ ಕೆಲವು ಅಸಮರ್ಥ ಉಪಾಧ್ಯಾಯರು ಮತ್ತು ಅವರ ತಪ್ಪು ತಪ್ಪಾದ ಪಾಠಗಳನ್ನೂ ಮರೆಯಲಸಾಧ್ಯವೇ....
ಹೈಸ್ಕೂಲಿನಲ್ಲಿ ಪಾಠ ಮಾಡುತ್ತಿದ್ದ ಕನ್ನಡ ಮೇಷ್ಟ್ರು ಎರಡನೇ ವರ್ಗಕ್ಕೆ ಸೇರಿದವರು....
ಅವರ ಪಾಠಗಳ ಕೆಲವು ತುಣುಕುಗಳು ಇಲ್ಲಿವೆ:
- ಬಸವಣ್ಣನವರು ಹೋರಾಡಿದ್ದು "ವರ್ಣ ವ್ಯವಸ್ಥೆ"ಯ ವಿರುದ್ಧ. "ವರ್ಣ ವ್ಯವಸ್ಥೆ" ಎಂದರೆ ಬಿಳಿಯರು (ಬ್ರಿಟಿಷರು) ಭಾರತೀಯರ ಬಗ್ಗೆ ತೋರುತ್ತಿದ್ದ ತಾರತಮ್ಯ!!!
- ಆಸ್ಪತ್ರೆಗೆ ಹೋಗುವುದು ಚಿಕಿತ್ಸೆ ಪಡೆಯಲು ಅಲ್ಲ - "ಚಿಕಿಸ್ತೆ"ಗಾಗಿ!!!
- ದ್ರೌಪದಿಗೆ ಪಾಂಚಾಲಿ ಎಂಬ ಹೆಸರು ಬಂದದ್ದು ಆಕೆ ಪಾಂಚಾಲ ದೇಶದ ರಾಜಕುಮಾರಿ ಎಂದಲ್ಲ - ಆಕೆಗೆ ಐದು ಜನ ಪತಿಯರಿದ್ದುದರಿಂದ!!!
- ಪಾಂಡವರಲ್ಲಿ ಮೊದಲನೆಯವನು ಧರ್ಮರಾಯ. ಯುದಿಷ್ಠಿರ ಶ್ರೀರಾಮನ ತಂದೆ, ದಶರಥ ಯಾರೆಂದು ತಿಳಿಯದು.
- ಗಂಗೂಬಾಯಿ ಹಾನಗಲ್ ಅವರು ಸಂಗೀತ ವಿದುಷಿ. ವಿದುಷಿ ಎಂಬ ಪದದ ಅರ್ಥ "ವಿದೂಷಕ" ಎಂದು!!!
ಹಾಗೆಯೇ ೩ನೇ ತರಗತಿಯಲ್ಲಿ ಹಂಪಿಯ ಬಗ್ಗೆ ಹೇಳುತ್ತಿದ್ದ ಇಂಗ್ಲಿಷ್ ಮೇಡಂ, ಪಠ್ಯ ಪುಸ್ತಕದಲ್ಲಿ ಕಡಲೇ ಕಾಳು ಗಣಪತಿ ಎಂದಿದ್ದುದನ್ನು Spelling mistake ಎಂದು ತಿದ್ದಿಸಿ "ಕಡಲ ಕಲ್ಲು ಗಣಪತಿ" ಎಂದು ಬರೆಸಿದ್ದುದು ಇನ್ನೂ ಮರೆತಿಲ್ಲ!!
ಹೀಗಿರುತ್ತಾರೆ ನಮ್ಮ ಇಂದಿನ ಕೆಲವು ಅಧ್ಯಾಪಕರು....... ನಗುವೂ ಬರುತ್ತದೆ, ವಿಶಾದವೂ ಆಗುತ್ತದೆ.......
Monday, September 04, 2006
ಅಬ್ಬಾ...
Monday, August 14, 2006
ಆರಂಭ
ಈಗ ಸಧ್ಯಕ್ಕೆ ಎನು ಬರೆಯಬೇಕೆಂದು ತೋಚುತ್ತಿಲ್ಲ......... ಮತ್ತೆ ಬೇಗನೆ ಬರುವೆ, ಬರೆವೆ :)
- Sum



