Friday, December 11, 2009

ಖಾಂಡೇಕರರ ಯಯಾತಿ

ಖಾಂಡೇಕರರ ಯಯಾತಿಯನ್ನು ಓದಿ ಮುಗಿಸಿ ಒಂದೂವರೆ ತಿಂಗಳೇ ಕಳೆದರೂ ಅದರ ಬಗ್ಗೆ ೨ ಸಾಲೂ ಬರೆಯಲು ಸಾಧ್ಯವಾಗಿಲ್ಲ. ಕೆಲಸ ಹೆಚ್ಚಾಗಿರುವುದು ಒಂದು ಕಾರಣವಾದರೆ, ಬರೆಯಬೇಕೆನ್ದಿರುವುದನ್ನು ಬರೆಯಲು ತಕ್ಕ ಪದಗಳು ದೊರೆಯದಿರುವುದೇ ಮತ್ತೊಂದು ಪ್ರಮುಖ ಕಾರಣ.

ಯಯಾತಿ ಒಂದು Classic novel. ಅದಕ್ಕೆ ಜ್ಞಾನಪೀಟ (i couldn't type the exact spelling :( ) ಪ್ರಶಸ್ತಿ ದೊರೆತಿರುವುದರಲ್ಲಿ ಯಾವುದೇ ಆಶ್ಚರ್ಯವಿಲ್ಲ. ಕಾರ್ನಾಡರ ಯಯಾತಿಗೂ, ಖಾಂಡೇಕರರ ಯಯಾತಿಗೂ ಬಹಳ ವ್ಯತ್ಯಾಸವನ್ನು ಕಂಡೆ. ಹೌದು ಒಂದು ದೊಡ್ಡ ಕಾದಂಬರಿಯಾದರೆ ಮತ್ತೊಂದು ನಾಟಕ. ಆ ನಾಟಕವನ್ನು ನಾನು ಪಿ.ಯು.ಸಿ ಯ ನಂತರ ಮತ್ತೆ ಓದಿಲ್ಲವಾದರೂ, ಈ ಕಾದಂಬರಿಯಲ್ಲಿ ಬಹಳ ಸೂಕ್ಷ್ಮತೆಗಳನ್ನು ಸೆರೆ ಹಿಡಿದಿದ್ದಾರೆ ಎಂದು ಹೇಳಬಲ್ಲೆ.

ಯಯಾತಿ, ದೇವಯಾನಿ, ಶರ್ಮಿಷ್ಠೆ, ಹಾಗು ಕಚ - ಇವು ಪ್ರಮುಖ ಪಾತ್ರಗಳಾಗಿದ್ದು, ಈ ನಾಲ್ಕೂ ಪಾತ್ರಗಳ ಮನಃ ಸ್ಥಿತಿ ಯನ್ನು ಬಹಳ ಸುಂದರವಾಗಿ ವಿವರಿಸಿದ್ದಾರೆ. ಯಯಾತಿಯ ಮನಸ್ಸಿನ ಗೊಂದಲಗಳು, ಅವನ ಅಸಂತೃಪ್ತ ಮನಸ್ಸು, ಪಟ್ಟದರಸಿಯಾಗುವುದೊಂದೇ ಜೀವನದ ಸಂತೋಷ ಎಂದು ಭಾವಿಸಿದ್ದ ದೇವಯಾನಿ, ಆಕೆಯ ಹಟ, ತಾನು ಶುಕ್ರಾಚಾರ್ಯರ ಮಗಳೆಂಬ ಅಹಂಕಾರ, ಶರ್ಮಿಷ್ಠೆಯ ತ್ಯಾಗ, ಅಸಹಾಯಕತೆ.. ಹೀಗೆ ಪ್ರತಿಯೊಂದನ್ನೂ ಮನ ಮುಟ್ಟುವ ರೀತಿಯಲ್ಲಿ ಬರೆದಿದ್ದಾರೆ.

ಪ್ರತಿಯೊಂದು ಪಾತ್ರವನ್ನು ಓದುವಾಗಲೂ, ಓದುಗರು ತಾವೇ ಆ ಪಾತ್ರವನ್ನು ಹೊಕ್ಕು, ಅನುಭವಿಸುವ ಹಾಗಿದೆ!ನಾನಂತೂ, ಇದನ್ನು ಓದುವಾಗ ಅದೆಷ್ಟೋ ಬಾರಿ, ಸಂಪೂರ್ಣವಾಗಿ ಆ ಸನ್ನಿವೇಶಗಳಲ್ಲಿ ಮುಳುಗಿ ಹೋಗಿ, ನನಗೇ ತಿಳಿಯದೆ ಕಣ್ಣೀರು ಸುರಿಸುವಂತಾಗಿತ್ತು! ನಾನು ಅಷ್ಟೊಂದು ತಲ್ಲೀನಲಾಗಿರುವುದನ್ನು ಕಂಡು ದೀಪಕ್ ಕೆಲವೊಮ್ಮೆ ನಾನು ಓದುವುದೇ ಸಾಕು ಎಂದೂ ಯೆಚ್ಚರಿಸಿದ್ದುಂಟು !

ನಿಮಗೂ ಯಯಾತಿ ಇಷ್ಟವಾಗುತ್ತದೆ ಎಂದು ಖಂಡಿತವಾಗಿ ಹೇಳಬಲ್ಲೆ. ಅವಕಾಶ ಸಿಕ್ಕಾಗ ಖಂಡಿತ ಓದಿ.

Pls excuse the typos in this post, which i could identify, but tried hard in vain to fix them, thanks to this kannada editor :(